ಇಂದು ಬೆಳಗಷ್ಟೇ ಚಾಮರಾಜನಗರ ಜಿಲ್ಲೆ ಸಂತೇಮರಳ್ಳಿಯಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ರಾಜ್ಯದಲ್ಲಿ 2+1 ಸೂತ್ರ ಜಾರಿಯಲ್ಲಿದೆ. ಇದು ಕುಟುಂಬ ರಾಜಕಾರಣದ ವೈಖರಿ. ಸದಾ ನಿದ್ದೆ ಮಾಡುವ ರಾಜ್ಯದ ಮುಖ್ಯಮಂತ್ರಿಯ ಆವಿಷ್ಕಾರ ಇದು. ಅವರಿಗೆ ಸೋಲಿನ ಭಯ ಇದೆ, ಹೀಗಾಗಿಯೇ ಎರಡು ಕಡೆ ಸ್ಪರ್ಧಿಸುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದರು.