ನಿರ್ಗಮನದ ಹಾದಿಯಲ್ಲಿದೆ ಮೋದಿ ಸರ್ಕಾರ: ಆನಂದ್ ಶರ್ಮಾ

ಕರ್ನಾಟಕ ವಿಧಾನಸಭೆ ಚುನಾವಣೆ ಜೊತೆ ಮೋದಿ ನೇತೃತ್ವದ ಎನ್ ಎಡಿ ಎ ಸರ್ಕಾರ ನಿರ್ಗಮನದತ್ತ ಸಾಗತ್ತದೆ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ...
ಆನಂದ್ ಶರ್ಮಾ
ಆನಂದ್ ಶರ್ಮಾ
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಜೊತೆ ಮೋದಿ ನೇತೃತ್ವದ ಎನ್ ಎಡಿ ಎ ಸರ್ಕಾರ ನಿರ್ಗಮನದತ್ತ ಸಾಗತ್ತದೆ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಶರ್ಮಾ ಫ್ರಧಾನಮಂತ್ರಿ ಕಚೇರಿಯ ಘನತೆ ಹಾಳು ಮಾಡಿರುವ ಮೋದಿ ವಿರುದ್ಧ ಜನ ಬೇಸತ್ತಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದ ಆರ್ಥಿಕತೆ ಉಸಿರುಗಟ್ಟಿದ ಸ್ಥಿತಿಯಲ್ಲಿದೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಕಷ್ಟದ ಪರಿಸ್ಥಿಯಲ್ಲಿದ್ದು, ಉದ್ಯೋಗ ಸೃಷ್ಟಿ ಭರವಸೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುಳ್ಳು ಹಾಗೂ ಮೋಸದ ತಳಪಾಯದ ಮೇಲೆ ಮೋದಿ ಸರ್ಕಾರ ನಿಂತಿದೆ. ಉದ್ಯೋಗ ಸೃಷ್ಟಿ, ಭರವಸೆ, ರೈತರ ಬೆಳೆಗಳಿಗೆ ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ, ಮಹಿಳಾ ಸುರಕ್ಷತೆ ಬಗ್ಗೆ ಮೋದಿ ಭರವಸೆ ನೀಡಿದ್ದರು. ಅದ್ಯಾವುವು ಈಡೇರಿಲ್ಲ, ಜೊತೆಗೆ ಕೇಂದ್ರ ಸರ್ಕಾರ  ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com