ಬೆಂಗಳೂರು: 'ಮೈಸೂರು ಹುಲಿ' ಟಿಪ್ಪು ಸುಲ್ತಾನ್ ಅವರನ್ನು ಪಾಕಿಸ್ತಾನ ಸರ್ಕಾರ ಶುಕ್ರವಾರ ಹಾಡಿ ಹೊಗಳುವ ಮೂಲಕ ಮೇ 12ಕ್ಕೆ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಕರ್ನಾಟಕದಲ್ಲಿ ಬಿಜೆಪಿ - ಕಾಂಗ್ರೆಸ್ ನಾಯಕರ ವಾಕ್ಸಮರಕ್ಕೆ ತುಪ್ಪ ಸುರಿದಿದೆ.
ಟಿಪ್ಪು ಸುಲ್ತಾನ್ ಎದುರಾಳಿಗಳಿಗೆ ಭಯ ಹುಟ್ಟಿಸುವಂತಹ ಒಬ್ಬ ಧೀರ ಯೋಧನಾಗಿದ್ದ ಎಂದು ಹೇಳುವ ಮೂಲಕ ಪಾಕಿಸ್ತಾನ 'ಮೈಸೂರು ಹುಲಿ'ಯ 218ನೇ ಪುಣ್ಯತಿಥಿಯನ್ನು ನೆನಪಿಸಿಕೊಂಡಿದೆ.
ಟಿಪ್ಪು ಒಬ್ಬ ಪ್ರಮುಖ ಮತ್ತು ಪ್ರಭಾವಶಾಲಿ ಐತಿಹಾಸಿಕ ವ್ಯಕ್ತಿ. ಅವರು ಆರಂಭದಿಂದಲೇ ಯುದ್ಧ ಕಲೆಯಲ್ಲಿ ತರಬೇತಿ ಪಡೆದಿದ್ದರೂ ಎಂದು ಪಾಕ್ ಸರ್ಕಾರ ಟ್ವೀಟ್ ಮಾಡಿದೆ.
ಟಿಪ್ಪುವನ್ನು ಹಾಡಿ ಹೊಗಳಿದ ಪಾಕ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಕರ್ನಾಟಕ ಚುನಾವಣೆಯಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಗೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದೆ.
Revisiting an important & influential historical figure, Tiger of Mysore - Tipu Sultan on his death anniversary. Right from his early years, he was trained in the art of warfare & had a fascination for learning. #TipuSultanpic.twitter.com/Izts0HKdgD