ರಾಜ್ಯದಲ್ಲಿದ್ದರೆ ಶಾಸಕರನ್ನು ಉಳಿಸಿಕೊಳ್ಳುವುದು ಕಷ್ಟ ಎಂಬ ಅರಿವು ಬರುತ್ತಿದ್ದಂತೆಯೇ ಶಾಸಕರನ್ನು ಹೊರರಾಜ್ಯಕ್ಕೆ ಸಾಗಿಸಲು ಕಾಂಗ್ರೆಸ್ ತೀರ್ಮಾನ ಕೈಗೊಂಡಿದ್ದರು. ಅದನ್ನು ಜಾರಿಗೆ ತಂದಿದ್ದು ಕೂಡ ಶಿವಕುಮಾರ್ ಸಹೋದರರು. ಮತ್ತೆ ಶಾಸಕರನ್ನು ನಗರಕ್ಕೆ ಕರೆ ತಂದು ಅವರು ಮತ ಚಲಾಯಿಸುವವರೆಗೂ ಅವರ ಮೇಲೆ ಕಣ್ಗಾವಲಿಟ್ಟಿದ್ದು, ಯಾರೂ ಬಿಜೆಪಿಯ ಸಂಪರ್ಕಕ್ಕೆ ಬರದಂತೆ ತಡೆದಿದ್ದು ಹಾಗೂ ಬಿಜೆಪಿಯ ವಶದಲ್ಲಿದ್ದ ಕಾಂಗ್ರೆಸ್ ಶಾಸಕ ಆನಂತ್ ಸಿಂಗ್ ಅವರು ಪಕ್ಷದ ತೆಕ್ಕೆಗೆ ಹಿಂದಿರುಗಿದಾಗ ಅವರನ್ನು ಕರೆತಂದಿದ್ದು ಹಾಗೂ ವಿಪ್ ಜಾರಿಗೊಳಿಸಿದ್ದು ಡಿ.ಕೆ.ಶಿವಕುಮಾರ್.