ಬಿಜೆಪಿಯವರನ್ನು ಆಪರೇಟ್ ಮಾಡುವುದು ಅಸಾಧ್ಯ, ನಾನು ಯಾವುದೇ ಹಣ ಕೊಟ್ಟಿಲ್ಲ: ಡಿ.ಕೆ ಶಿವಕುಮಾರ್

ರಾಮನಗರ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಎಲ್​.ಚಂದ್ರಶೇಖರ್​ಹಿಂದೆ ಸರಿಯುವುದಕ್ಕೆ ಡಿಕೆಶಿ ಬ್ರದರ್ಸ್​ಕಾರಣ ಆರೋಪಕ್ಕೆ ಜಲ ಸಂಪನ್ಮೂಲ...
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
ಬಳ್ಳಾರಿ:  ರಾಮನಗರ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಎಲ್​.ಚಂದ್ರಶೇಖರ್​ಹಿಂದೆ ಸರಿಯುವುದಕ್ಕೆ ಡಿಕೆಶಿ ಬ್ರದರ್ಸ್​ಕಾರಣ  ಆರೋಪಕ್ಕೆ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬಳ್ಳಾರಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ  ಶಿವಕುಮಾರ್ ಚಂದ್ರಶೇಖರ್ ಹಿಂದೆ ಸರಿದಿರುವ ಬಗ್ಗೆ  ನನಗೇನು ಗೊತ್ತಿಲ್ಲ. ನನ್ನ ಗಮನಕ್ಕೇನು ಬಂದಿತ್ತೆಂದರೆ ಯೋಗೇಶ್ವರ್​, ಅಶ್ವಥ್​ ನಾರಾಯಣ್ ಸೇರಿ ಹಲವು ಬಿಜೆಪಿ ಮುಖಂಡರು ನ.6 ರಂದು ಬಿಜೆಪಿ ಸರ್ಕಾರ ರಚನೆ ಮಾಡುತ್ತಾರೆ. ಬ್ಯಾಗ್​ಗಳಲ್ಲಿ ದುಡ್ಡಿನ ಕಂತೆ ತೆಗೆದುಕೊಂಡು ನಮ್ಮ ಎಂಎಲ್​ಎಗಳಿಗೆ ಕೇಳಲಿದ್ದಾರೆ. ಇದೇ ನಿಟ್ಟಿನಲ್ಲಿ ಬಿಎಸ್​ವೈ ಕೂಡ ನ.6ರಂದು ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದರು ಎಂದು ಟಾಂಗ್​ ನೀಡಿದರು.
ನಾನು ರಾಮನಗರಕ್ಕೆ ಹೋಗೇ ಇಲ್ಲ. ಇದರ ಬಗ್ಗೆ ನನಗೇನು ಗೊತ್ತಿಲ್ಲ. ಇಂದು ರಾಮನಗರಕ್ಕೆ ತೆರಳಿ ಧ್ವಜಾರೋಹಣ ಮಾಡಬೇಕೆಂದಿದ್ದೆ. ಆದರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂಬ ಕಾರಣಕ್ಕೆ ಅಲ್ಲಿಗೆ ತೆರಳಿಲ್ಲ  ಎಂದು ಸ್ಪಷ್ಟನೆ ನೀಡಿದರು.
ಚಂದ್ರಶೇಖರ್​ ಅವರ ಆಪರೇಷನ್​ ಕುರಿತು ಮಾಹಿತಿ ಇರಲಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ , ಬಿಜೆಪಿಯವರನ್ನು ಆಪರೇಟ್​ ಮಾಡುವುದಕ್ಕಾಗುತ್ತೇನ್ರಿ? ಅವರು ಬಹಳ ನಿಸ್ಸೀಮರು, ಅವರನ್ನು ಆಪರೇಟ್​ ಮಾಡುವುದು ಅಸಾಧ್ಯ. ನಾನು ಯಾವುದೇ ಹಣ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com