ಯಡಿಯೂರಪ್ಪ ರೀತಿ ಮೋದಿಗೂ ಸದ್ಯದಲ್ಲೇ ಕಾದಿದೆ 'ಶಾಸ್ತಿ': ಸಿದ್ದರಾಮಯ್ಯ

ರಾಫೆಲ್ ಯುದ್ದ ವಿಮಾನ ಖರೀದಿ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಪಾತ್ರವಿದೆ. ಯಡಿಯೂರಪ್ಪ ರೀತಿ ಮೋದಿಗೂ ಸದ್ಯದಲ್ಲೇ ಶಿಕ್ಷೆ ಕಾಯ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಜಮಖಂಡಿ : ರಾಫೆಲ್ ಯುದ್ದ ವಿಮಾನ ಖರೀದಿ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಪಾತ್ರವಿದೆ. ಯಡಿಯೂರಪ್ಪ ರೀತಿ ಮೋದಿಗೂ ಸದ್ಯದಲ್ಲೇ  ಶಿಕ್ಷೆ ಕಾಯ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜಮಖಂಡಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ  ಮೋದಿ  ಹಿಂದಿನ ಕಾಂಗ್ರೆಸ್ ಸರ್ಕಾರನ್ನು ಶೇ, 10 ರಷ್ಟು ಕಮಿಷನ್ ಸರ್ಕಾರ ಎಂದಿದ್ದರು. ಆದರೆ. ರಾಫೆಲ್ ಯುದ್ದ ವಿಮಾನ ಹಗರಣದಲ್ಲಿ ಫ್ರಾನ್ಸ್ ನಿಂದ ಪಡೆದ ಕಮೀಷನ್ ಬಗ್ಗೆ ಗೌಪ್ಯವಾಗಿಡಲಾಗಿದೆ.  ನರೇಂದ್ರ ಮೋದಿ ದೇಶದ ಜನರನ್ನು ವಂಚಿಸಲು ಸಾಧ್ಯವಿಲ್ಲ ಎಂದರು.

ರಾಫೆಲ್ ಯುದ್ಧ ವಿಮಾನ ಖರೀದಿ ಸಂಬಂಧ ಫ್ರಾನ್ಸ್ ಸರ್ಕಾರದೊಂದಿಗೆ ಅಕ್ರಮ ವ್ಯವಹಾರ ನಡೆಸಿರುವ ಜವಾಬ್ದಾರಿಯನ್ನು  ಮೋದಿ ಹೊರಬೇಕಾಗುತ್ತದೆ. ಸುಪ್ರೀಂಕೋರ್ಟ್ ನಿಂದ ಶಿಕ್ಷೆಗೊಳಗಾಗುತ್ತಾರೆ ಎಂದು ಹೇಳಿದರು.

ಅಂಬಾನಿ, ಅದಾನಿ, ನೀರವ್ ಮೋದಿ, ಮಲ್ಯ ಮತ್ತಿತರ ದೊಡ್ಡ ಉದ್ಯಮಿಗಳಿಗೆ ಮಾತ್ರ ಮೋದಿ ಆಡಳಿತ ಉತ್ತಮ ದಿನವಾಗಿದೆ. ಬಡವರು, ಸಾಮಾನ್ಯವರ್ಗದವರು, ಮಹಿಳೆಯರು ಮತ್ತು ಯುವಕರು ಸಂಕಷ್ಟದಲ್ಲಿದ್ದಾರೆ. ಮಧ್ಯಮ ವರ್ಗದವರಿಗೆ ಸಹಾಯ ಮಾಡುತ್ತಾರೆ ಎಂಬ ಅತಿ ಭರವಸೆಯೊಂದಿಗೆ ಜನರು ಮೋದಿಯನ್ನು ಗೆಲ್ಲಿಸಿದರು. ಆದರೆ. ಅವರನ್ನು ಮೋದಿ ವಂಚಿಸಿದ್ದಾರೆ. ಇದೇನಾ ಅಚ್ಚೇ ದಿನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com