ಬಳ್ಳಾರಿ: ರಾಮನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ನನ್ನ ಮಗ ಎಲ್ ಚಂದ್ರಶೇಖರ್ ಹಿಂದೆ ಸರಿದಿರುವುದು ರಾಜಕೀಯ ಆತ್ಮಹತ್ಯೆ, ಅದೊಂದು ಆತ್ಮದ್ರೋಹದ ಕೆಲಸ ಎಂದು ಕಾಂಗ್ರೆಸ್ ಎಂಎಲ್ ಸಿ ಎಂ ಲಿಂಗಪ್ಪ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷದಿಂದ ಸ್ಪರ್ದಿಸಿದ್ದ ನನ್ನ ಮಗ ಹೇಡಿಯಂತೆ ವರ್ತಿಸಿದ್ದಾನೆ. ಮತದಾನ ಎರಡು ದಿನ ಇರುವಾಗ ಈ ಘಟನೆ ನಡೆದಿರುವುದು ಅನೈತಿಕವಾದದ್ದು, ನನ್ನ ಮಗ ಹೀಗೆ ಮಾಡಬಾರದಿತ್ತು, ಕಣದಲ್ಲಿ ಉಳಿದು ಸ್ಪರ್ಧೆ ಎದುರಿಸಬೇಕಿತ್ತು ಎಂದು ಹೇಳಿದ್ದಾರೆ.
ನಮಗೆ ಅನುಮಾನ ಬಂದಿತ್ತು. ಆದರೆ ಆಗಲೇ 'ಬಿ' ಫಾರಂ ಕೊಟ್ಟಾಗಿದ್ದ ಕಾರಣ ಬದಲಿಸುವ ಸಾಧ್ಯತೆ ಇರಲಿಲ್ಲ. ಅಲ್ಲದೆ ಈ ಕಾರಣಕ್ಕಾಗಿಯೇ ನಾನು ಅಲ್ಲಿಗೆ ಪ್ರಚಾರಕ್ಕೆ ಹೋಗಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ,ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಇಂತಹ ಕೀಳುಮಟ್ಟದ ರಾಜಕಾರಣಕ್ಕೆ ಬಿಜೆಪಿ ಯಾವತ್ತು ಹೆದರುವುದಿಲ್ಲ. ಆದರೆ ಚಂದ್ರಶೇಖರ್ ಅವರ ಈ ಕಾರ್ಯದಿಂದ ಕಾರ್ಯಕರ್ತರಿಗೆ ನೋವಾಗಿದೆ. ಚಂದ್ರಶೇಖರ್ ಬಿಜೆಪಿಗೆ ಮತ್ತು ಕಾರ್ಯಕರ್ತರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.