ಶಿವಮೊಗ್ಗ ಗೆಲುವು ಪಕ್ಷಕ್ಕೆ ಹಿನ್ನಡೆಯಲ್ಲ, ನಾವು 2 ಲಕ್ಷ ಮತಗಳ ಅಂತರ ನಿರೀಕ್ಷಿಸಿದ್ದೆವು, ಮತದಾನದದ ಪ್ರಮಾಣದಲ್ಲಿ ಕಡಿಮೆಯಾಗಿದ್ದರಿಂದ ಮತಗಳ ಪ್ರಮಾಣ ಕಡಿಮೆಯಾಗಿದೆ. ಮತದಾನ ಮಾಡದ ಶೇ. 15ರಷ್ಟು ಮತದಾರರು ವಿದ್ಯಾವಂತರು, ಹೀಗಿದ್ದರೂ ಕೂಡ ಅವರು ಬೂತ್ ಗೆ ತೆರಳಿ ಮತದಾನ ಮಾಡಿಲ್ಲ, ನಮಗೆ ಈಡಿಗ ಸಮುದಾಯದ ಮತಗಳು ಹೆಚ್ಚಿಗೆ ಬಂದಿವೆ, ಸಿಎಂ ಕುಮಾರಸ್ವಾಮಿ ಶಿವಮೊಗ್ಗದಲ್ಲಿ ನಾಲ್ಕು ದಿನ ಪ್ರಚಾರ ಮಾಡಿದರು. ಸಿದ್ದರಾಮಯ್ಯ, ದೇವೇಗೌಡ ಕೂಡ ಎರಡೆರಡು ಬಾರಿ ಬಂದು ಪ್ರಚಾರ ಮಾಡಿದರೂ ಪ್ರಯೋಜನವಾಗಿಲ್ಲ, ಮಧು ಅವರನ್ನು ಗೆಲ್ಲಿಸಲು ವಿಫಲರಾಗಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಹೇಳಿದ್ದಾರೆ.