ಬಳ್ಳಾರಿಯ ಪ್ರಮುಖ ನಾಯಕರುಗಳಾದ ಲಾಡ್ ಸಹೋದರರು ಶುಕ್ರವಾರ ನಡೆದ ಸಭೆಗೆ ಗೈರಾಗಿದ್ದರು ಪರಮೇಶ್ವರ್ ನಾಯಕ್, ಇ. ತುಕರಾಂ ಮತ್ತು ಬಿ, ನಾಗೇಂದ್ರದ್ದು ಒಂದು ಬಣವಾದರೇ ಭೀಮಾ ನಾಯಕ್ ಮತ್ತು ಜೆ.ಎನ್ ಗಣೇಶ್, ಆನಂದ್ ಸಿಂಗ್ ಅವರದ್ದು ಮತ್ತೊಂದು ಬಣವಾಗಿದ್ದು ತಮ್ಮ ನಿಷ್ಠರಿಗೆ ಟಿಕೆಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ. ಯಾವುದೇ ಅಭ್ಯರ್ಥಿ ಫೈನಲ್ ಆಗದ ಕಾರಣ, ಡಿ.ಕೆ ಶಿವಕುಮಾರ್ ಎಲ್ಲರೂ ಒಪ್ಪುವಂತ ಸಹಮತದ ಅಭ್ಯರ್ಥಿಯಾದ ಉಗ್ರಪ್ಪ ಅವರ ಹೆಸರನ್ನು ಹೇಳಿದ್ದಾರೆ,