ಪಕ್ಷ ತೊರೆಯುವುದಾಗಿ ಬೆದರಿಕೆ ಹಾಕಿದ್ದ ಎಂಎಲ್ ಸಿ ಯಿಂದ ಸಿದ್ದರಾಮಯ್ಯಗೆ ಪತ್ರ

ಕಾಂಗ್ರೆಸ್ ನಾಯಕರ ನಡೆಯಿಂದ ಬೇಸತ್ತು ಅಸಮಾಧಾನ ತೋರ್ಪಡಿಸಿದ್ದ ಕಾಂಗ್ರೆಸ್ ಎಂಎಲ್ ಸಿ ರಘು ಆಚಾರ್ ಮಾಜಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ನಾಯಕರ ನಡೆಯಿಂದ ಬೇಸತ್ತು  ಅಸಮಾಧಾನ ತೋರ್ಪಡಿಸಿದ್ದ ಕಾಂಗ್ರೆಸ್ ಎಂಎಲ್ ಸಿ ರಘು ಆಚಾರ್ ಮಾಜಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯಗೆ ಪತ್ರ ಬರೆದಿರುವ ಪರಿಷತ್ ಸದಸ್ಯ ರಘು ಆಚಾರ್, ಶಾಸಕರ ಕ್ಷೇತ್ರಾಭಿವೃದ್ದಿ ಅನುದಾನ, ಸಮ್ಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿ ಮುಂದುವರೆಯುವ ವಿಚಾರ, ಕ್ಷೇತ್ರದ ಅಭಿವೃದ್ದಿ ಕುಂದುಕೊರತೆಗಳನ್ನ ಆಲಿಸುವು ಸೇರಿದಂತೆ ಎಲ್ಲಾ ವಿಷಯಗಳನ್ನ ಚರ್ಚಿಸಲು  ಶಾಸಕಾಂಗ ಸಭೆ ಕರೆಯಬೇಕು. ಒಂದು ದಿನದ ಜಂಟಿ ಅಧಿವೇಶನ ಕರೆಯಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಮೆಡಿಕಲ್ ಕಾಲೇಜನ್ನ ಚಿತ್ರದುರ್ಗದಿಂದ ಕನಕಪುರಕ್ಕೆ ಸ್ಥಳಾಂತರಿಸಿರುವುದಕ್ಕೆಹಾಗೂ ಈ ಬಗ್ಗೆ ಕ್ಷೇತ್ರದ ಅಭಿವೃದ್ದಿ ಬಗ್ಗೆ ಚರ್ಚಿಸಲು ಸಿಎಂ ಭೇಟಿಗೆ ಅವಕಾಶ ಕೇಳಿದರೂ ಅನುಮತಿ ನೀಡುತ್ತಿಲ್ಲ ಎಂದು  ರಘು ಆಚಾರ್ ಅಸಮಾಧಾನ ಗೊಂಡಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com