ಜಾರಕಿಹೊಳಿ ಸಹೋದರರು ಹಾಗೂ ಶಿವಕುಮಾರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ, ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯಿಂದ ಆರಂಭವಾದ ಈ ಮೈಮನಸ್ಯ ಇಲ್ಲಿಯವರೆಗೂ ಬಂದಿದೆ. ಉಪ ಚುನಾವಣೆ ಮೇಲೆ ಗಮನ ಕೇಂದ್ರೀಕರಿಸಿರುವ ಕಾಂಗ್ರೆಸ್ ಉನ್ನತ ನಾಯಕರು ಜಾರಕಿಹೊಳಿ ಭಿನ್ನಾಭಿಪ್ರಾಯ ಶಮನ ಮಾಡಲು ಆಸಕ್ತಿ ಹೊಂದಿಲ್ಲ, ಆದರೆ ಇಬ್ಬರನ್ನು ಪ್ರತ್ಯೇಕವಾಗಿ ಹಾಗೂ ಪರಸ್ಪರ ದೂರ ಇರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ, ಜಾರಕಿಹೊಳಿ ಜೊತೆಗಿನ ಜಗಳದಿಂದ ದೂರ ಇರುವ ಶಿವಕುಮಾರ್ ಬಳ್ಳಾರಿ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ನಡೆಸುತ್ತಿದ್ದಾರೆ.