ಮಾಜಿ ಸಿಎಂ ಬಂಗಾರಪ್ಪ 2004 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದಾಗಿನಿಂದ ಸಹೋದರರ ನಡುವೆ ಮೂಡಿದ ವೈರತ್ವ ಇನ್ನೂ ಕಡಿಮೆಯಾಗಿಲ್ಲ, ಬಂಗಾರಪ್ಪ ಜೊತೆ ಮಧು ಮತ್ತು ಕುಮಾರ್ ಇಬ್ಬರು ಬಿಜೆಪಿ ಸೇರಿದ್ದರು, ಆ ವೇಳೆ ಪಕ್ಷದ ಟಿಕೆಟ್ ಅನ್ನು ಬಂಗಾರಪ್ಪ ಮಧುಗೆ ಕೊಡಿಸಿದ್ದರು, ಇದರಿಂದ ಆಕ್ರೋಶ ಗೊಂಡ ಕುಮಾರ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಮರುಸೇರ್ಪಡೆಯಾಗಿದ್ದರು, ಎಸ್, ಬಂಗಾರಪ್ಪ ಏಳು ಬಾರಿ ಸೊರಬ ಕ್ಷೇತ್ರದಿಂದ ಆರಿಸಿ ಶಾಸಕರಾಗಿದ್ದರು. ಆದರೆ 2004 ರಲ್ಲಿ ಮಧು ಅವರಿಗೆ ಗೆಲುವು ತಂದುಕೊಡಲು ವಿಫಲಗಾಗಿದ್ದರು