ಮತದಾರರಿಗೆ ಸಮ್ಮಿಶ್ರ ಸರ್ಕಾರದ ಬಗ್ಗೆ ನಂಬಿಕೆಯಿದೆ, ಭರವಸೆ ಇದೆ, ಹೀಗಾಗಿ ಗೆಲುವು ಸಾಧ್ಯವಾಗಿದೆ. ಮತದಾರರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಸರ್ಕಾರದ ಬಗ್ಗೆ ಜನರಲ್ಲಿ, ಅಧಿಕಾರಿಗಳಿಗೆ ತಪ್ಪು ಕಲ್ಪನೆ ಮೂಡಿಸಿ ಅವರಲ್ಲಿ ಭರವಸೆ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ. ಆದರೆ ಸರ್ಕಾರ ಹೇಗೆ ನಡೆಸಬೇಕು ಎಂದು ನಮಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.