ಆಪರೇಷನ್ ಕಮನದ ಭೀತಿಯಿಂದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರತೆಯಿಂದ ಕಾಪಾಡಲು ಜಂಟಿ ಕಾರ್ಯಂತ್ರ ರೂಪಿಸುವ ಸಂಬಂಧ ಸಿದ್ದರಾಮಯ್ಯ ನಿವಾಸ ಕೇವೇರಿಯಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಕುಮಾರಸ್ವಾಮಿಯವರಿಗೆ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ ಅವರು, ಆಪರೇಷನ್ ಕಮಲ ವಿಚಾರವನ್ು ಮುಂದಿಟ್ಟುಕೊಂಡು ಬಿಜೆಪಿಗೆ ದೊಡ್ಡ ಹೊಡೆತವನ್ನು ನೀಡಬಹುದಿತ್ತು. ಆದರೆ, ನಿಮ್ಮ ದಗೆ ಎಬ್ಬಿಸುವ ಹೇಳಿಕೆಯು ಇಂತಹ ಅವಕಾಶ ಕೈಚೆಲ್ಲಿ ಹೋಗುವಂತೆ ಮಾಡಿದೆ. ಬಿಜೆಪಿಗೆ ಸಮ್ಮಿಶ್ರ ಸರ್ಕಾರದ ವಿರುದ್ಧ ಹೋರಾಡಲು ಅಸ್ತ್ರ ದೊರಕಿದೆ. ಇಂತಹ ಹೇಳಿಕೆ ನೀಡುವ ಮುನ್ನ ಎಚ್ಚರ ವಹಿಸಿ ಎಂದು ತಿಳಿಸಿದ್ದಾರೆಂದು ತಿಳಿದುಬಂದಿದೆ.