ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ: ಎಸ್ಎ ರಾಮದಾಸ್

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಬಿಜೆಪಿ ಸಾಕಷ್ಟು ಪ್ರಮಾಣಿಕ ಪ್ರಯತ್ನಗಳನ್ನು ಮಾಡಿದ್ದು, ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂದು ಮಾಜಿ ಸಚಿವ ಎಸ್ಎ.ರಾಮದಾಸ್ ಅವರು ಹೇಳಿದ್ದಾರೆ.
ಎಸ್ಎ ರಾಮದಾಸ್
ಎಸ್ಎ ರಾಮದಾಸ್
Updated on

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಬಿಜೆಪಿ ಸಾಕಷ್ಟು ಪ್ರಮಾಣಿಕ ಪ್ರಯತ್ನಗಳನ್ನು ಮಾಡಿದ್ದು, ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂದು ಮಾಜಿ ಸಚಿವ ಎಸ್ಎ.ರಾಮದಾಸ್ ಅವರು ಹೇಳಿದ್ದಾರೆ. 

ಉಪಚುನಾವಣಾ ಫಲಿತಾಂಶಕ್ಕೆ ಇನ್ನು ಒಂದೇ ದಿನ ಬಾಕಿಯಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕೆಟ್ಟ ಸಂಘಟನೆಯಿಂದ ಪಕ್ಷ ಸಾಕಷ್ಟು ಸಂಕಷ್ಟವನ್ನು ಎದುರಿಸಿತ್ತು. 90ರ ದಶಕದಲ್ಲಿ ಬಿಜೆಪಿ ಸೇರಿದ್ದ ಕೋಡಿ ಪಾಪಣ್ಣ, ಜಿಟಿದೇವೇಗೌಡ ಸೇರಿದಂತೆ ಇನ್ನಿತರೆ ನಾಯಕರು ನಂತರ ಪಕ್ಷವನ್ನು ತೊರೆದಿದ್ದರು. ಪಕ್ಷದ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ ಅವರು ಗೆಲುವು ಸಾಧಿಸುವ ಸಲುವಾಗಿ ಪಕ್ಷ ಸಾಕಷ್ಟು ಶ್ರಮಪಟ್ಟಿದೆ. ಉಪಚುನಾವಣೆ ಫಲಿತಾಂಶವನ್ನು ಈಗಲೇ ಊಹಿಸುವುದು ಕಷ್ಟಕರ. ಆದರೆ, ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ. ಈ ಬಾರಿ ಬಿಜೆಪಿ 10 ಕ್ಷೇತ್ರಕ್ಕೆ ಹೆಚ್ಚು ರಡೆ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.  

ಮತ್ತೆ ಅಧಿಕಾರಕ್ಕೆ ಬರುವ ವಿರೋಧ ಪಕ್ಷಗಳ ಕನಸು ಎಂದಿಗೂ ನನಸಾಗದು. ಸ್ಥಿರ ಸರ್ಕಾರ ರಚಿಸುವಷ್ಟು ಬಲ ಬಿಜೆಪಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ. 

ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡುತ್ತಿಲ್ಲ. ರಾಜಕೀಯ ಪಕ್ಷಗಳು ಜಾತಿಯನ್ನು ಕೇಂದ್ರೀಕರಿಸುತ್ತಿರುವುದು ನಿಜಕ್ಕೂ ದುರಂತ. ಇಂತಹ ಬೆಳವಣಿಗೆ ರಾಜ್ಯ ಹಾಗೂ ರಾಜ್ಯದ ಜನತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com