ಮತ್ತೆ ಮಾತು ಮುಂದುವರಿಸಿದ ಮಾಧುಸ್ವಾಮಿ, ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಕೊಲ್ಕೊತ್ತಾ ಮುಖ್ಯಮಂತ್ರಿ ಸಿಬಿಐನ್ನೇ ಪ್ರಶ್ನಿಸಿದ್ದಾರೆ. ಅಂತಹುದರಲ್ಲಿ ನಾವು ಎಸ್ ಐಟಿಯನ್ನು ಸುಮ್ಮನೆ ಬಿಡುತ್ತೇವೆಯೇ. ಕೋರ್ಟಿನಲ್ಲಿ ಖಂಡಿತ ಪ್ರಶ್ನಿಸುತ್ತೇವೆ. ಪೊಲೀಸರ ಜತೆ ದೋಸ್ತಿ, ದುಷ್ಮನಿ ಎರಡೂ ಬೇಡ. ಅವರಿಂದ ಅಂತರ ಕಾಯ್ದುಕೊಳ್ಳಬೇಕು. ನಾಲ್ಕು ಗೋಡೆಗಳ ಒಳಗೆ ಕೂತು ತಾವು ಇದನ್ನು ಸರಿಪಡಿಸಬಹುದಿತ್ತು. ನಮ್ಮ ಭಾವನೆಗಳಿಗೆ ಸಭಾದ್ಯಕ್ಷರು ಬೆಲೆ ಕೊಡಲಿಲ್ಲ ಎಂಬ ಆರೋಪ ಬರುವುದು ಬೇಡ ಎಂದು ಮಾಧುಸ್ವಾಮಿ. ನ್ಯಾಯಾಲಯ ಪ್ರಕ್ರಿಯೆ ಪ್ರತಿಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದರು.