ಬೆಳಗಾವಿ ಜಿಲ್ಲೆಯ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಸೋಮವಾರ ರಾತ್ರಿ 'ಜಯ ಕರ್ನಾಟಕ ಸೈನ್ಯ' ಸಂಘಟನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರ ದೇಶಭಕ್ತಿಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ, ಸಮಾಜದ ಎಲ್ಲ ಕ್ಷೇತ್ರಗಳಂತೆಯೇ ರಾಜಕೀಯದಲ್ಲೂ ಒಳ್ಳೆಯ ರಾಜಕಾರಣಿಗಳಿರುತ್ತಾರೆ. ಸಮಾಜಮುಖಿಯಾಗಿ, ಸಮಾಜಕ್ಕೋಸ್ಕರ ಬದುಕುತ್ತಿರುವ ಹಲವ ರಾಜಕಾರಣಿಗಳು ನಮ್ಮ ಕಣ್ಣಮುಂದೆಯೇ ಇದ್ದಾರೆ. ಈ ಪೈಕಿ ಸಿಎಂ ಕುಮಾರಸ್ವಾಮಿ ಅವರ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೈತರಿಗಾಗಿ ಹೋರಾಟ ಮಾಡಿ ಸುಮಾರು 50 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಇವರೇನೂ ಮೋಸಗಾರರಲ್ಲ. ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಜಾರಿಗೆ ತಂದಿದ್ದ ಪ್ರಜಾ ಸ್ನೇಹಿ ಯೋಜನೆಗಳಿಂದ ಇಂದು ಸಮಾಜದ ಹಲವು ವರ್ಗದ ಜನರು ಫಲ ಅನುಭವಿಸುತ್ತಿದ್ದಾರೆ. ಅವರೆಂದೂ ಮೋಸಗಾರರಾಗಲು ಸಾಧ್ಯವೇ ಇಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.