ಡಿಕೆಶಿ ಬುಕ್ ಮಾಡಿದ್ದ ರೂಂ ಕ್ಯಾನ್ಸಲ್ ಮಾಡಿದ ಹೋಟೆಲ್: ಐ ಲವ್ ಮುಂಬಯಿ ಎಂದ ಶಿವಕುಮಾರ್!

ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಮುಂಬಯಿಯ ರಿನೈಸೆನ್ಸ್ ಹೋಟೆಲ್ ನಲ್ಲಿ ಬುಕ್ ಮಾಡಿದ್ದ ಕೊಠಡಿಯನ್ನು ಹೋಟೆಲ್ ನವರು ಕ್ಯಾನ್ಸಲ್ ...
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
Updated on
ಮುಂಬಯಿ: ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಮುಂಬಯಿಯ ರಿನೈಸೆನ್ಸ್ ಹೋಟೆಲ್ ನಲ್ಲಿ ಬುಕ್ ಮಾಡಿದ್ದ ಕೊಠಡಿಯನ್ನು ಹೋಟೆಲ್ ನವರು ಕ್ಯಾನ್ಸಲ್ ಮಾಡಿದ್ದಾರೆ.
ತುರ್ತು ಕಾರಣ ನೀಡಿ ಹೋಟೆಲ್ ನವರು ರೂಂ ಕ್ಯಾನ್ಸಲ್ ಮಾಡಿದ್ದಾರೆ, ಇದಕ್ಕೆ ನನಗೇನು ಬೇಸರವಿಲ್ಲ, ನಾನು ಮುಂಬಯಿಯನ್ನು ಪ್ರೀತಿಸುತ್ತೇನೆ, ಆ ಹೋಟೆಲ್ ಅನ್ನು ಪ್ರೀತಿಸುತ್ತೇನೆ, ನನ್ನಂತ ಕಸ್ಟಮರ್ ಪಡೆಯಲು ಹೋಟೆಲ್ ನವರು ಹೆಮ್ಮೆ ಪಡಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.
ಅವರು ರೂಂ ಕ್ಯಾನ್ಸಲ್ ಮಾಡಿದರೇ ಚಿಂತೆಯಿಲ್ಲ, ಬದಲಾಗಿ ನನಗೆ ಬೇರೆ ರೂಂ ಇದೆ ಎಂದು ಹೇಳಿದ್ದಾರೆ, ಬೆಳಗ್ಗೆ 8 ಗಂಟೆಗೆ ಮುಂಬಯಿಗೆ ಆಗಮಿಸಿದ್ದ ಡಿ.ಕೆ ಶಿವಕುಮಾರ್ ಹೋಟೆಲ್ ಮುಂದೆ ನಿಂತುಕೊಂಡೇ ಇದ್ದರು, ಹೀಗಾಗಿ ಪೊಲೀಸರು ಅವರಿಗೆ ಹೋಟೆಲ್ ಮುಂದೆಯೇ ಚೇರ್ ಹಾಕಿ ಕೂರಿಸಿದ್ದಾರೆ,. ಜೊತೆಗೆ ಉಪಹಾರದ ವ್ಯವಸ್ಥೆ ಕೂಡ ಮಾಡಿದ್ದಾರೆ. ಇವತ್ತು ಶಾಸಕರನ್ನು ಭೇಟಿ ಮಾಡಿಕೊಂಡೇ ಹೋಗುವುದಾಗಿ ಶಿವಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com