ರಾಜ್ಯ ರಾಜಕೀಯ ಬಿಕ್ಕಟ್ಟು: ರಾಜಿನಾಮೆ ಬಿಬಿಎಂಪಿ ಸದಸ್ಯರು ಸಜ್ಜು!

ಶಾಸಕರ ರಾಜೀನಾಮೆ ಪರ್ವದ ಬೆನ್ನಿಗೇ ಕಾಂಗ್ರೆಸ್‌-ಜೆಡಿಎಸ್‌ ಬಿಬಿಎಂಪಿ ಸದಸ್ಯರು ರಾಜಿನಾಮೆ ನೀಡಲು ಯೋಜಿಸುತ್ತಾರೆ....
ಬಿಬಿಎಂಪಿ ಕೌನ್ಸಿಲರ್ ಸಭೆ( ಸಂಗ್ರಹ ಚಿತ್ರ)
ಬಿಬಿಎಂಪಿ ಕೌನ್ಸಿಲರ್ ಸಭೆ( ಸಂಗ್ರಹ ಚಿತ್ರ)
ಬೆಂಗಳೂರು: ಶಾಸಕರ ರಾಜೀನಾಮೆ ಪರ್ವದ ಬೆನ್ನಿಗೇ ಕಾಂಗ್ರೆಸ್‌-ಜೆಡಿಎಸ್‌ ಬಿಬಿಎಂಪಿ ಸದಸ್ಯರು  ರಾಜಿನಾಮೆ ನೀಡಲು ಯೋಜಿಸುತ್ತಾರೆ.
ಬೆಂಗಳೂರಿನ 28 ಶಾಸಕರ ಪೈಕಿ, ರಾಮಲಿಂಗಾ ರೆಡ್ಡಿ, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜು ಮತ್ತು ಗೋಪಾಲಯ್ಯ ರಾಜಿನಾಮೆ ನೀಡಿದ್ದಾರೆ, ಹೀಗಾಗಿ ಈ ನಾಲ್ಕರು ಶಾಸಕರು ಪ್ರತಿನಿಧಿಸುವ ಬಿಟಿಎಂ ಲೇಔಟ್, ಯಶವಂತಪುರ, ಕೆ.ಆರ್ ಪುರಂ ಹಾಗೂ ಮಹಾಲಕ್ಷ್ಮಿ ಲೇಔಟ್  ವಿಧಾನ ಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಬಿಬಿಎಂಪಿ ಕೌನ್ಸಿಲರ್ ಗಳು ರಾಜಿನಾಮೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ,
ಜೆಡಿಎಸ್ ಶಾಸಕ ಗೋಪಾಲಯ್ಯ ಪತ್ನಿ ಹೇಮಲತಾ ಕೂಡ ರಾಜಿನಾಮೆ ನೀಡುವ  ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅವರು ರಾಜಿನಾಮೆ ನೀಡಿದರೇ  ಮರು ಚುನಾವಣೆಗೆ ಹೋಗುತ್ತೇವೆ, ಬಿಬಿಎಂಪಿಯನ್ನು ವಿಸರ್ಜಿಸುವುದಿಲ್ಲ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಶಿವರಾಜ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com