ವಿಶ್ವಾಸಮತ ಚರ್ಚೆ: ವಿಧಾನಸೌಧಕ್ಕೆ ಬರಿಗಾಲಲ್ಲೇ ಬಂದ ಹೆಚ್ ಡಿ ರೇವಣ್ಣ- ವಿಡಿಯೋ
ನಿಂಬೆಹಣ್ಣ ಹಿಡಿದು ಸುದ್ದಿಯಾಗಿದ್ದ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಈಗ ವಿಶ್ವಾಸಮತ ಚರ್ಚೆಯಲ್ಲಿ ಪಾಲ್ಗೊಳ್ಳಲು ವಿಧಾಸೌಧಕ್ಕೆ ಬರಿಗಾಲಲ್ಲೇ ಬಂದು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಬೆಂಗಳೂರು: ನಿಂಬೆಹಣ್ಣ ಹಿಡಿದು ಸುದ್ದಿಯಾಗಿದ್ದ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಈಗ ವಿಶ್ವಾಸಮತ ನಿರ್ಣಯ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳಲು ವಿಧಾಸೌಧಕ್ಕೆ ಬರಿಗಾಲಲ್ಲೇ ಬಂದು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿಶ್ವಾಸಮತದ ಮೇಲಿನ ಚರ್ಚೆ ನಡೆಯುತ್ತಿದ್ದು, ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಈ ಚರ್ಚೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎಚ್ ಡಿ ರೇವಣ್ಣ ಬರಿಗಾಲಲ್ಲೇ ವಿಧಾನಸೌಧಕ್ಕೆ ಬಂದಿರುವ ವಿಡಿಯೋ ವೈರಲ್ ಆಗಿದೆ. ಹಲವು ಬಾರಿ ಬರಿಗಾಲಲ್ಲಿ ದೇಗುಲಗಳಿಗೆ ಭೇಟಿ ನೀಡುತ್ತಿದ್ದ ರೇವಣ್ಣ, ಸದನಕ್ಕೂ ಬರಿಗಾಲಲ್ಲಿ ಆಗಮಿಸುವ ಮೂಲಕ ಗಮನ ಸೆಳೆದಿದ್ದಾರೆ.
#WATCH: Karnataka Minister & son of H D Deve Gowda, H D Revanna arrived barefoot at the state Assembly, for trust vote debate, today. (Earlier visuals) #Bengalurupic.twitter.com/uoDNsP0N4X