ಸಿಎಂ ಕುಮಾರಸ್ವಾಮಿ
ಸಿಎಂ ಕುಮಾರಸ್ವಾಮಿ

ನಾವು ಪಾಲಿಸಿದ ಸತ್ಯ, ಧರ್ಮ ನಮ್ಮನ್ನು ಕಾಪಾಡುತ್ತದೆ: ಬೈಬಲ್ ನ ಜಡ್ಜ್ ಮೆಂಟ್ ಡೇ ಪ್ರಸ್ತಾಪಿಸಿದ ಸಿಎಂ!

ನಾನು ರಾಜಕೀಯಕ್ಕೆ ಅನಿವಾರ್ಯವಾಗಿ ಬಂದವನು. 2004ರಲ್ಲಿ ನಾನು ಮೊದಲ ಬಾರಿಗೆ ಶಾಸಕನಾಗಿ ರಾಜಕೀಯ ಪ್ರವೇಶ. ಮಾಡಿದೆ, ನನಗೆ ಯಾವುದೇ ಅಧಿಕಾರದ ಆಸೆ ಇರಲಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ....
ಬೆಂಗಳೂರು: ನಾನು ರಾಜಕೀಯಕ್ಕೆ ಅನಿವಾರ್ಯವಾಗಿ ಬಂದವನು. 2004ರಲ್ಲಿ ನಾನು ಮೊದಲ ಬಾರಿಗೆ ಶಾಸಕನಾಗಿ ರಾಜಕೀಯ ಪ್ರವೇಶ. ಮಾಡಿದೆ, ನನಗೆ ಯಾವುದೇ ಅಧಿಕಾರದ ಆಸೆ ಇರಲಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಕುಮಾರಸ್ವಾಮಿ, ಅಂದೂ ಕೂಡಾ ರಾಜಕೀಯ ಪರಿಸ್ಥಿತಿ ಹೀಗೆಯೇ ಇತ್ತು.ಕುಮಾರಸ್ವಾಮಿ, 2004 ರಲ್ಲಿ ಇಂದಿನಂತೆಯೇ ಪರಿಸ್ಥಿತಿ ಇತ್ತು, ಹೀಗಾಗಿ ಬಿಜೆಪಿ ಜೊತೆ ಕೈ ಜೋಡಿಸಿದ್ದೆ, ಧರಂಸಿಂಗ್ ಗೆ ನಾನು ಬೆನ್ನಿಗೆ ಚೂರಿ ಹಾಕಿದೆ ಎಂದು ನನ್ನ ಮೇಲೆ ಆರೋಪ ಮಾಡಿದ್ದರು. ಅವರ ಸಾವಿಗೆ ನಾನು ಕಾರಣ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.ಅಪ್ಪ ಹೇಳಿದಂತೆ ಮಗ ಡ್ರಾಮಾ ಮಾಡುತ್ತಾನೆ ಎನ್ನುತ್ತಾರೆ ಇದು ನನ್ನ ಹಣೆ ಬರಹ ಎಂದು ಹೇಳಿದ್ದಾರೆ.
ಇನ್ನೂ ಬೈಬಲ್ ನಲ್ಲಿರುವ ಜಡ್ಜ್ ಮೆಂಟ್ ಡೇ  ಬಗ್ಗೆ ಉಲ್ಲೇಖಿಸಿದ ಕುಮಾರಸ್ವಾಮಿ, ನಾವು ಪಾಲಿಸದ ಧರ್ಮ ಸತ್ಯ ನಮ್ಮನ್ನು ಕಾಪಾಡುತ್ತದೆ ಎಂದು ಹೇಳಿದ್ದಾರೆ. ನಾವು ದೇವರನ್ನು ನಂಬುವರು, ನಮಗೆ ದೇವರ ಮೇಲೆ ಭಯ ಇದೆ,  ಹೀಗಾಗಿ ನಾನು ಸತ್ಯ ನುಡಿಯುತ್ತೇನೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com