ಮುಂದಿನ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದು, ಈ ತಿಂಗಳ ಅಂತ್ಯದೊಳಗೆ ಹಣಕಾಸು ಮಸೂದೆಗೆ ಸದನದಲ್ಲಿ ಒಪ್ಪಿಗೆ ಪಡೆಯುವುದು, ಅತೃಪ್ತ ಶಾಸಕರನ್ನು ಮತ್ತು ನಿಷ್ಠಾವಂತರನ್ನು ಸರ್ಕಾರದಲ್ಲಿ ಒಟ್ಟು ಸೇರಿಸುವುದು, ಮುಂದಿನ ಆರು ತಿಂಗಳಲ್ಲಿ ಎದುರಾಗುವ ಉಪ ಚುನಾವಣೆಯಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಈ ಎಲ್ಲಾ ಸವಾಲುಗಳು ಯಡಿಯೂರಪ್ಪನವರಿಗೆ ಸದ್ಯ ಇವೆ.