ಮೈತ್ರಿ ಸರ್ಕಾರದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿನ್ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಸೋಮವಾರ ವಿಧಾನಸಭಾ ಅಧಿವೇಶನದಲ್ಲಿ ವಿಶ್ವಾಸಮತಕೋರುವುದಾಗಿ, ಹಣಕಾಸು ವಿಧೇಯಕ ಮಂಡಿಸಿವುದಾಗಿ ಪ್ರಕಟಿಸಿದರು. ಸಿಬ್ಬಂದಿಯ ವೇತನ ಮತ್ತಿತರ ಸರ್ಕಾರಿ ವೆಚ್ಚಗಳಿಗೆ ಹಣಪಡೆಯಲು ವಿಧಾನಸಭೆ ಜುಲೈ 31ರೊಳಗೆ ಹಣಕಾಸು ವಿಧೇಯಕ ಅಂಗೀಕರಿಸಬೇಕಿದೆ.