ಮೊನ್ನೆ ನಡೆದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಚಿವ ಸಂಪುಟ ರಚನೆಯಲ್ಲಿ ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿಲ್ಲ. ಒಬ್ಬರೇ ಒಬ್ಬ ಅಲ್ಪಸಂಖ್ಯಾತರನ್ನು ಮಂತ್ರಿ ಮಾಡಿರುವುದು, ಹಿಂದುಳಿದ ವರ್ಗದಲ್ಲಿ ಕೂಡ ಒಬ್ಬರಿಗೊ, ಇಬ್ಬರಿಗೊ ಮಂತ್ರಿ ಸ್ಥಾನ ನೀಡಿದ್ದಾರೆ. ದಲಿತರಿಗೂ ಮೂರ್ನಾಲ್ಕು ಸಂಸದರನ್ನು ಮಂತ್ರಿಯನ್ನಾಗಿ ಮಾಡಿದ್ದಾರಷ್ಟೆ,57 ಜನರಲ್ಲಿ ಕೆಲವರಿಗೆ ನಾಮಕಾವಸ್ಥೆ ಮಂತ್ರಿಗಿರಿ ನೀಡಿದರೆ, ಕರ್ನಾಟಕದಿಂದ ಒಬ್ಬರಿಗೂ ದಲಿತ, ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಕೊಟ್ಟಿಲ್ಲ, ಅದು ಅನ್ಯಾಯ, ಸಾಮಾಜಿಕ ನ್ಯಾಯ ಅಲ್ಲ ಎಂದು ಟ್ವಿಟ್ಟರ್ ನಲ್ಲಿ ನಾನು ಹೇಳಿದ್ದೇನೆ ಎಂದರು.