-ಸರ್ಕಾರ ಪೂರ್ಣಾವಧಿ ಮುಗಿಸಿದರೆ ನಮಗೆ ಯಾವುದೇ ಸಮಸ್ಯೆಯಿಲ್ಲ. ನಾವು ವಿರೋಧ ಪಕ್ಷದಲ್ಲಿ ಇರುತ್ತೇವೆ. ಆದರೆ ಅಭಿವೃದ್ಧಿ ಎಲ್ಲಿದೆ? ರೈತರ ಸಾಲಮನ್ನಾ ವಿಷಯ ಗೊಂದಲದಲ್ಲಿದೆ. ರೈತರ ಖಾತೆಯಲ್ಲಿ ಹಣ ಠೇವಣಿಯಿಡುವ ನಿರ್ಧಾರ ಹಿಂತೆಗೆದುಕೊಳ್ಳಲಾಗಿದೆ.ಶಾಸನ ಸಮಿತಿ ಅಧ್ಯಕ್ಷ ಎ ಟಿ ರಾಮಸ್ವಾಮಿ ರಾಜೀನಾಮೆ ನೀಡಿದ್ದಾರೆ. ಸರ್ಕಾರದಲ್ಲಿ ಅನೇಕ ಭಿನ್ನಾಭಿಪ್ರಾಯವಿದೆ. 15ರಿಂದ 20 ದಿನ ಕಾಯಿರಿ, ಮತ್ತೆ ಏನಾಗುತ್ತದೆ ನೋಡಿ.