ನಿನ್ನೆ ನಡೆದ ಸಭೆಯಲ್ಲಿ ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಿಲ್ಲ ಮದ್ಯಾಹ್ನದ ಭೋಜನಕ್ಕಾಗಿ ಸೇರಿದ್ದೆವು ಎಂದು ಜೆಡಿಎಸ್ ಸಂಸದ ಎಲ್,ಶಿವರಾಮೇಗೌಡ ಹೇಳಿದ್ದಾರೆ, ನಾನು ದೇವೇಗೌಡರ ಕುಟುಂಬದ ಸದಸ್ಯ, ನಾನು ಈಗಾಗಲೇ ಹಲವು ಚುನಾವಣೆಗಳನ್ನು ಎದುರಿಸಿದ್ದೇನೆ, ಮಂಡ್ಯದಿಂದ್ ನಿಖಿಲ್ ಕುಮಾರ ಸ್ವಾಮೀ ಸ್ಪರ್ಧಿಸುವುದರಲ್ಲಿ ಯಾವುದೇ ಬದಲಾವಣೆಯಿಲ್ಲ, ನಿಖಿಲ್ ಗೆದ್ದೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರ ಸ್ಪರ್ಧೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.