ನಿಖಿಲ್ ಕುಮಾರ್ ಇನ್ನೂ ಯುವಕ, ಆತನಿಗೆ ಇನ್ನೂ ಹಲವು ಅವಕಾಶಗಳಿವೆ, ಆದರೆ ಸುಮಲತಾ ಅವರಿಗೆ ಇದು ಸರಿಯಾದ ಸಮಯ, ಆಕೆ ವಿದ್ಯಾವಂತೆ, ಪ್ರಬುದ್ಧವಾಗಿ ಚಿಂತನೆ ಹಾಗೂ ಮಾತನಾಡುವ ಮಹಿಳೆ, ನಮಗೆ ನಿಖಿಲ್ ಬಗ್ಗೆ ಯಾವ ದ್ವೇಷವಿಲ್ಲ, ಆದರೆ ಅಂಬರೀಷ್ ಕುಟುಂಬದವರೊಬ್ಬರು ಸಂಸದರಾಗಬೇಕೆಂಬುದು ನಮ್ಮ ಬಯಕೆ ಎಂದು ದೊಡ್ಡರಸಿಕೆರೆ ಸೋಮಾರಿ ಟೀ ಅಂಗಡಿಯ 68 ವರ್ಷದ ಪುಟ್ಟಸ್ವಾಮಿ ಎಂಬುವರು ಹೇಳಿದ್ದಾರೆ.