ಕೃಷ್ಣ ಬೈರೇಗೌಡ ಮಾತನಾಡಿ, ದೇವೇಗೌಡರು ನಮ್ಮ ಅಭ್ಯರ್ಥಿ ಆಗಬೇಕು ಎಂದು ಎಲ್ಲಾ ಶಾಸಕರು, ಮುಖಂಡರು ಮನವಿ ಮಾಡಿದ್ದೇವೆ. ನಿನ್ನೆ ಕಾಂಗ್ರೆಸ್ ಪಕ್ಷದ ಐದು ಶಾಸಕರು ಸಭೆ ನಡೆಸಿ ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಆಗಬೇಕು ಎಂದು ನಿರ್ಣಯಿಸಿದ್ದೇವೆ. ಗೌಡರಿಗೆ ಕೇಳಿದಾಗ ಯೋಚನೆ ಮಾಡಿ ಹೇಳುತ್ತೇನೆ ಎಂದು ಹೇಳಿದ್ದಾರೆ. ಅವರಿಗೆ ತುಮಕೂರಿನಿಂದಲೂ ಸ್ಪರ್ಧಿಸುವಂತೆ ಒತ್ತಡ ಇದೆ. ಈ ಬಗ್ಗೆ ಮತ್ತೊಮ್ಮೆ ದೇವೇಗೌಡರ ಜೊತೆ ಚರ್ಚಿಸುತ್ತೇವೆ. ನಾವು ಯಾವುದೇ ಆಯ್ಕೆಯನ್ನು ಮುಂದಿಟ್ಟುಕೊಂಡಿಲ್ಲ ಎಂದರು.