ಚುನಾವಣೆ ವೇಳೆ ತಟಸ್ಥರಾಗಿ ಉಳಿದಿದ್ದೇವೆ ಎಂದು ಹೇಳುತ್ತಲೇ ಅವರು ಪಕ್ಷೇತರ ಅಭ್ಯರ್ಥಿ ಪರ ಬಹಿರಂಗವಾಗಿಯೇ ನಾಗಮಂಗಲದಲ್ಲಿ ಪ್ರಚಾರ ಮಾಡಿದ್ದಾರೆ. ಬಿಜೆಪಿ ಬೆಂಬಲಿತ, ಪಕ್ಷೇತರ ಅಭ್ಯರ್ಥಿಗೆ ಇವರೆಲ್ಲರ ಸ್ಪಷ್ಟ ಬೆಂಬಲವಿದೆ. ಒಂದಂತೂ ಸತ್ಯ, ಇವೆಲ್ಲರದರ ಹಿಂದೆ ಯಾರದೋ ಪ್ರಬಲ ಕೈವಾಡವಿದೆ. ಅವರು ಮಹಾನ್ ರಾಜಕೀಯ ವ್ಯಕ್ತಿಗಳು ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಹ ಗುರಿಯಾಗಿಸಿ ಸುರೇಶ್ ಗೌಡ ಕಟುವಾಗಿ ಟೀಕಿಸಿದ್ದಾರೆ.