ನೂತನ ಯೋಜನೆಗಳನ್ನು ಘೋಷಿಸದೆ ಮುಂದುವರಿದ ಕಾಮಗಾರಿಗಳು, ಸದ್ಯದ ಪರಿಸ್ಥಿತಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಇತ್ತೀಚಿಗೆ ಹೈಕೋರ್ಟ್ ನೀಡಿದ ಹಲವಾರು ನಿರ್ದೇಶಗಳು, ಎಸ್ಸಿಎಸ್ಟಿ ಮುಂಬಡ್ತಿ ವಿವಾದ, ಶೈಕ್ಷಣಿಕ ಪ್ರವೇಶಾತಿ ಆರಂಭ, ಶಾಲಾ ಕಾಲೇಜುಗಳ ಮೂಲಸೌಕರ್ಯ, ಪಠ್ಯ ಪುಸ್ತಕಗಳು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವತ್ತ ಸರ್ಕಾರ ಚಿತ್ತ ಹರಿಸಲಿದೆ ಎಂದು ತಿಳಿದುಬಂದಿದೆ.