ತುಮಕೂರಿನಿಂದ ದೇವೇಗೌಡರು ಕಣಕ್ಕಿಳಿಯಲು ತೀವ್ರ ವಿರೋಧಗಳು ವ್ಯಕ್ತ ವಾಗಿದ್ದವು. ಕ್ರೀಯಾಶೀಲ ಸಂಸದ ಎಂದೇ ಖ್ಯಾತರಾಗಿದ್ದ ಮುದ್ದ ಹನುಮೇಗೌಡರಿಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು, ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ, ಆದರೆ ಅವರು ತುಮಕೂರನ್ನು ಆಯ್ಕೆ ಮಾಡಿಕೊಂಡರು.ಸ್ಥಳೀಯ ನಾಯಕರ ವಿರೋಧ ಹಾಗೂ ಬೆಸೆಯದ ಮೈತ್ರಿಯಿಂದ ದೇವೇಗೌಡರು ಭಾರೀ ಬೆಲೆ ತೆರಬೇಕಾಯಿತು.