ನಂತರ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು ಎಸ್ಎಂ ಕೃಷ್ಣ ಅವರು ಹಿರಿಯರು, ಆರೋಗ್ಯ ವಿಚಾರಿಸಲು ಬಂದಿದ್ದೆ. ಬೇರೆ ಯಾವುದೇ ರಾಜಕೀಯ ವಿಷಯಗಳನ್ನು ಮಾತನಾಡಲಿಲ್ಲ. ನಾನು ರಾಜಿನಾಮೆ ನೀಡುವ ದಿನ ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದರು. ಇದೇ ವೇಳೆ ಮಾತನಾಡಿದ ಕೆ. ಸುಧಾಕರ್ ಅವರು ಬಿಜೆಪಿಯಲ್ಲಿದ್ದರೂ ಕೃಷ್ಣ ಅವರದ್ದು ಆದರ್ಶ ವ್ಯಕ್ತಿತ್ವ ಹೊಂದಿರುವವರು ಹೀಗಾಗಿ ಅವರನ್ನು ಮಾತನಾಡಿಸಲು ಬಂದಿದ್ದೆ ಎಂದು ಹೇಳಿದರು.