ದೇವೇಂದ್ರ ಫಡ್ನವೀಸ್ ಗೆ  ಪ್ರಮಾಣ ವಚನ ಭೋಧಿಸಿ ರಾಜ್ಯಪಾಲ ಕೋಶಿಯಾರ್ ತಪ್ಪು ಮಾಡಿದರು!

ಮಹಾರಾಷ್ಟ್ರದಲ್ಲಿ ಏರಿಕೆಯಾಗಿದ್ದ ರಾಷ್ಟ್ರಪತಿ ಆಳ್ವಿಕೆ ರದ್ದು ಪಡಿಸಿ ದೇವೇಂದ್ರ ಫಡ್ನವೀಸ್ ಗೆ ಸಿಎಂ ಆಗಿ ಪ್ರಮಾಣ ವಚನ ಬೋಧಿಸಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ತಪ್ಪು ಮಾಡಿದರು ಎಂದು  ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ. 
ದೇವೇಂದ್ರ ಫಡ್ನವೀಸ್
ದೇವೇಂದ್ರ ಫಡ್ನವೀಸ್

ನವದೆಹಲಿ: ಮಹಾರಾಷ್ಟ್ರದಲ್ಲಿ ಏರಿಕೆಯಾಗಿದ್ದ ರಾಷ್ಟ್ರಪತಿ ಆಳ್ವಿಕೆ ರದ್ದು ಪಡಿಸಿ ದೇವೇಂದ್ರ ಫಡ್ನವೀಸ್ ಗೆ ಸಿಎಂ ಆಗಿ ಪ್ರಮಾಣ ವಚನ ಬೋಧಿಸಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ತಪ್ಪು ಮಾಡಿದರು ಎಂದು  ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ. 

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,  ರಾಷ್ಟ್ರ ಪತಿ ಆಳ್ವಿಕೆಯನ್ನು ರದ್ದು ಪಡಿಸಿ ಪ್ರಮಾಣ ವಚನ ಬೋಧಿಸಿ ತಪ್ಪು ಮಾಡಿದ್ದಾರೆ ಎಂದು ಹೇಳಿದ್ದಾರೆ,

ಫಡ್ನವೀಸ್ ಅವರಿಗೆ ಬಹಮತ ಇದೆಯೇ ಇಲ್ಲವೇ ಎಂಬ ಬಗ್ಗೆ ರಾಜ್ಯಪಾಲರು ಮೊದಲು ತಿಳಿದುಕೊಳ್ಳಬೇಕಿತ್ತು, ಆನಂತರ ಅವರಿಗೆ ಅವಕಾಶ ನೀಡಬೇಕಿತ್ತು ಎಂದು ಹೇಳಿದ್ದಾರೆ.

ಕಾಂಗ್ರೆಸ್-ಎನ್ ಸಿಪಿ- ಶಿವಸೇನೆ ಪಕ್ಷಗಳು ಸೇರಿ ರಚಿಸುತ್ತಿರುವ ಸರ್ಕಾರ ಸಮರ್ಥವಾಗಿದ್ದು ಉತ್ತಮ ಆಡಳಿತ ನೀಡಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com