ಗಣೇಶ ಮೂರ್ತಿ,ಸೀರೆ ಹಂಚಿದರೂ ಡಾ. ಸುಧಾಕರ್ ಉಪ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ- ವೀರಪ್ಪ ಮೊಯ್ಲಿ

ಅನರ್ಹ ಶಾಸಕ ಡಾ. ಎಂ. ಸುಧಾಕರ್ ಜನರಿಗೆ ಗಣೇಶ ಮೂತ್ರಿ, ಸೀರೆಗಳನ್ನು ಹಂಚಿದರೂ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಮಾಜಿ ಸಂಸದ ಎಂ. ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ. ಎಂ. ಸುಧಾಕರ್ ಜನರಿಗೆ ಗಣೇಶ ಮೂತ್ರಿ, ಸೀರೆಗಳನ್ನು ಹಂಚಿದರೂ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಮಾಜಿ ಸಂಸದ ಎಂ. ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇದೆ.ಅಮೃತ ಕುಡಿದವರನ್ನೇ ಉಳಿಸುವುದಕ್ಕೆ ಸಾಧ್ಯವಿಲ್ಲ ಇನ್ನು ವಿಷ ಕುಡಿದವರು ಬದುಕುಳಿಯುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಜೊತೆ ಹೋದ ಶಾಸಕರ ಇಂದಿನ ಪರಿಸ್ಥಿತಿ ಹೀಗಿದ್ದು, ರಾಜ್ಯ ಬಿಜೆಪಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದರು.

ಅನರ್ಹ ಶಾಸಕರು ಸುಪ್ರೀಂಕೋರ್ಟ್  ಕದ ತಟ್ಟಿದ್ದಾರೆ. ಆದರೆ, ನ್ಯಾಯಾಲಯದ ತೀರ್ಪು ತಕ್ಷಣಕ್ಕೆ ನೀಡದಿದ್ದರೆ ಅನರ್ಹ ಶಾಸಕರು ಅನರ್ಹರಾಗಿಯೇ ಉಳಿಯಲಿದ್ದಾರೆ ತೀರ್ಪಿಗೆ ಮೊದಲೇ ಚುನಾವಣೆ ನಡೆದರೆ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಮತದಾರರಿಗೆ ಸುಧಾಕರ್ ಏನೇ ಆಮಿಷಗಳು ನೀಡಿದರೂ ಕ್ಷೇತ್ರದ ಜನತೆ ಅವರಿಗೆ ತಕ್ಕ ಪಾಠವನ್ನಂತೂ ಕಲಿಸಲಿದ್ದಾರೆ ಎಂದು ಸುಧಾಕರ್ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com