ಡಿ.ಕೆ ಶಿವಕುಮಾರ್ ಕಾನೂನು ಹೋರಾಟಕ್ಕೆ ಎಚ್.ಡಿ ದೇವೇಗೌಡರ ಟಿಪ್ಸ್: ಸಿ.ಎಸ್ ಪುಟ್ಟರಾಜು

ಹಗಲು ಹೊತ್ತು ಸಿದ್ದರಾಮಯ್ಯ ಜತೆ, ರಾತ್ರಿ ಹೊತ್ತು ಯಡಿಯೂರಪ್ಪ ಜತೆ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿಗೆ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ತಿರುಗೇಟು ನೀಡಿದ್ದಾರೆ.
ದೇವೇಗೌಡ
ದೇವೇಗೌಡ
Updated on

ಮಂಡ್ಯ: ಹಗಲು ಹೊತ್ತು ಸಿದ್ದರಾಮಯ್ಯ ಜತೆ, ರಾತ್ರಿ ಹೊತ್ತು ಯಡಿಯೂರಪ್ಪ ಜತೆ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿಗೆ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ತಿರುಗೇಟು ನೀಡಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರ ಸಂಬಂಧ ಏನು ಎನ್ನುವುದನ್ನು ತಿಳಿದು ಮಾತನಾಡಬೇಕು. ಅವರಿಬ್ಬರ ಸಂಬಂಧ ಗಟ್ಟಿಯಾಗಿದೆ,  ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್. ತಮ್ಮ ಕಾನೂನು ಹೋರಾಟಕ್ಕೆ ದೇವೇಗೌಡರ ಸಲಹೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಚಲುವರಾಯ ಸ್ವಾಮಿ ತಾವು ಲೈಮ್ ಲೈಟ್ ಆಗುವ ಉದ್ದೇಶದಿಂದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹಗಲು ಸಿದ್ದರಾಮಯ್ಯ ಜತೆ ರಾಜಕಾರಣ, ರಾತ್ರಿ ಯಡಿಯೂರಪ್ಪ ಜತೆ ರಾಜಕಾರಣ ಮಾಡುವುದನ್ನು ಚಲುವರಾಯಸ್ವಾಮಿ ಬಿಡಬೇಕು ಎಂದು ಟಾಂಗ್ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com