ದೇವೇಗೌಡರ ಕುಟುಂಬಕ್ಕೆ ವಿಷ ಉಣಿಸಿದ್ದು ಸಾ.ರಾ. ಮಹೇಶ್ : ಹೆಚ್.ವಿಶ್ವನಾಥ್

ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರ ಕುಟುಂಬಕ್ಕೆ ವಿಷ ಉಣಿಸಿದ್ದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆಪ್ತ ಸಾರಾ ಮಹೇಶ್ ಅವರೇ ಹೊರತು ನಾನಲ್ಲ ಎಂದು ಅನರ್ಹ ಶಾಸಕ ಎಚ್ ವಿಶ್ವನಾಥ್ ಗುಡುಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರ ಕುಟುಂಬಕ್ಕೆ ವಿಷ ಉಣಿಸಿದ್ದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆಪ್ತ ಸಾರಾ ಮಹೇಶ್ ಅವರೇ ಹೊರತು ನಾನಲ್ಲ ಎಂದು ಅನರ್ಹ ಶಾಸಕ ಎಚ್ ವಿಶ್ವನಾಥ್ ಗುಡುಗಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬಕ್ಕೆ ಮೋಸ ಮಾಡಿದ ಕೀರ್ತಿ ಸಾರಾ ಮಹೇಶ್ ಗೆ  ಸಲ್ಲುತ್ತದೆ. ತಾವು ಹಣಕ್ಕಾಗಿ ಯಾರಲ್ಲಿಯೂ ಬೇಡಿಕೆ ಇಟ್ಟಿಲ್ಲ. 26 ಕೋಟಿ ರೂಪಾಯಿಗಾಗಿ ನಾನು ಬಿಜೆಪಿ ಸೇರಿದ್ದೇನೆ ಎಂದು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಸಾರಾ ಮಹೇಶ್ ಒಬ್ಬ ಸುಳ್ಳುಗಾರ, ಅವರ ಮನೆ ದೇವರು ಕೂಡಾ ಸುಳ್ಳು ಎಂದು ಆರೋಪಿಸಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರ ಹಾಗೂ ಹಣಕ್ಕಾಗಿ ಬಿಜೆಪಿ ಸೇರಿದೆ ಎಂದು ಆರೋಪಿಸುವವರು ನನ್ನೊಂದಿಗೆ ಬೆಂಗಳೂರು, ಮೈಸೂರು ಅಥವಾ ಪತ್ರಕರ್ತರ  ಮುಂದೆ ಬಹಿರಂಗ ಚರ್ಚೆಗೆ ಬರಲಿ , ಚರ್ಚೆಯಲ್ಲಿ ಯಾರು ಸತ್ಯವಂತ, ಸುಳ್ಳುಗಾರ ಎನ್ನುವುದು ಬಹಿರಂಗವಾಗುತ್ತದೆ ಎಂದು ವಿಶ್ವನಾಥ್ ಆಹ್ವಾನ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com