ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಪ್ಪ ಮೊಯಿಲಿ, 370 ವಿಧಿ ರದ್ದುಗೊಳಿಸಿ ಕೇಂದ್ರ ಸರ್ಕಾರ ದೇಶದ ಜನರ ದಿಕ್ಕು ತಪ್ಪಿಸಿದೆ. ಮೋದಿ ಅವರನ್ನು ಅವತಾರಪುರುಷನಂತೆ ಬಿಂಬಿಸಲಾಗುತ್ತಿದೆ. ಕಾಶ್ಮೀರ ಈ ಹಿಂದೆಯೇ ಭಾರತಕ್ಕೆ ಸೇರಿದೆ. ಆದರೆ ಮೋದಿ ಅದನ್ನು ಈಗ ಸೇರಿಸಿರುವುದಾಗಿ ಬಿಂಬಿಸುತ್ತಿದ್ದಾರೆ. ಕಾಶ್ಮೀರ ಬಹಳ ವರ್ಷಗಳ ಹಿಂದಿನಿಂದಲೇ ದೇಶದ ಅವಿಭಾಜ್ಯ ಅಂಗವಾಗಿದೆ ಎನ್ನುವುದನ್ನು ಜನರಿಗೆ ತಿಳಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಜಮ್ಮುಕಾಶ್ಮೀರದ ಸಂವಿಧಾನವನ್ನು ಪ್ರಧಾನಿ ನರೇಂದ್ರ ಮೋದಿಯೂ ನೋಡಿರಲಿಲ್ಲ. ನಮ್ಮ ಕಾಂಗ್ರೆಸ್ ನಾಯಕರು ಆ ಬಗ್ಗೆ ತಿಳಿದುಕೊಳ್ಳಲಿಲ್ಲ. ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗ. ಆದರೂ ಅದನ್ನ ಪ್ರತ್ಯೇಕವಾಗಿಯೇ ನೋಡಿದ್ದೇವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.