ಸಂಸತ್ತಿನಲ್ಲಿ ದೇವೇಗೌಡರನ್ನು ಕೆಣಕಿದ್ದ ಮೋದಿಗೆ ಟ್ವೀಟ್ ಮೂಲಕ ಟಾಂಗ್ ಕೊಟ್ಟ ಎಚ್​ಡಿಡಿ

ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಪಕ್ಕ ಕುಳಿತಿದ್ದ ದೇವೇಗೌಡರನ್ನು ಕರ್ನಾಟಕ ರೈತರ ಸಾಲಮನ್ನಾ ವಿಚಾರ ಎತ್ತಿ ಪ್ರಧಾನಿ ನರೇಂದ್ರ ಮೋದಿ ಕೆಣಕಿದ್ದು ಇದಕ್ಕೆ ಮಾಜಿ ಪ್ರಧಾನಿ ....
ದೇವೇಗೌಡ
ದೇವೇಗೌಡ
ಬೆಂಗಳೂರು: ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಪಕ್ಕ ಕುಳಿತಿದ್ದ ದೇವೇಗೌಡರನ್ನು ಕರ್ನಾಟಕ ರೈತರ ಸಾಲಮನ್ನಾ ವಿಚಾರ ಎತ್ತಿ ಪ್ರಧಾನಿ ನರೇಂದ್ರ ಮೋದಿ ಕೆಣಕಿದ್ದು ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡ ಟ್ವೀಟ್ ಮೂಲಕ ಉತ್ತರಿಸಿದ್ದಾರೆ.
48 ಸಾವಿರ ಕೋಟಿ ರು. ಸಾಲಮನ್ನಾ ಆಗಲಿದೆ ಎಂದು ಹೇಳಿ ರಾಜ್ಯದಲ್ಲಿ ಇದುವರೆಗೆ ಏಳು ಸಾವಿರ ರೈತರ ಸಾಲವಷ್ಟೇ ಮನ್ನಾ ಆಗಿದೆ ಎಂದು ನರೇಂದ್ರ ಮೋದಿ ದೇವೇಗೌಡರನ್ನು ಸಂಸತ್ತಿನಲ್ಲಿ ಕೆಣಕಿದ್ದರು. ಆದರೆ ಆ ವೇಳೆ ಗಂಭೀರವಾಗಿಯೇ ಕುಳಿತಿದ್ದ ದೇವೇಗೌಡ ಇದೀಗ ಟ್ವೀಟ್ ಮೂಲಕ ಮೋದಿಗೆ ಟಾಂಗ್ ನೀಡಿದ್ದಾರೆ.
ಕರ್ನಾಟಕದಲ್ಲಿ ರೈತರ ಸಾಲಮನ್ನಾ ಯೋಜನೆ ಜಾರಿಯಲ್ಲಿದೆ. ಆದರೆ ಮೋದಿ ನೀಡಿರುವ ಭರವಸೆ ರಾಮ ಮಂದಿರ, ಗಂಗಾ ನದಿ ಶುದ್ದೀಕರಣ,ನದಿ ಜೋಡಣೆ, 15 ಲಕ್ಷ ರೂ. ಗಳನ್ನು ಜನರ ಖಾತೆಗೆ ಹಾಕುವೆ ಎಂದದ್ದು ಸೇರಿ ಹಲವು ಭರವಸೆಗಳ ಸ್ಥಿತಿ "ಏನೂ ಇಲ್ಲ" ಎಂಬಂತಾಗಿದೆ ಎಂದು ಟೀಕಿಸಿದ್ದಾರೆ.
ಅಲ್ಲದೆ "ಏನೂ ಇಲ್ಲ" ಎಂಬ ಸ್ಥಿತಿಗಿಂತ "ಜಾರಿಯಲ್ಲಿದೆ" ಎಂಬ ಸ್ಥಿತಿ ಉತ್ತಮವಾದದ್ದು ಎಂದೂ ಅವರು ಹೇಳಿದ್ದಾರೆ.
ಇನ್ನು ಬಿಜೆಪಿ ಪಾಲಿಗೆ ಸಧ್ಯ ಜಾರಿಯಲ್ಲಿರುವ ಸ್ಥಿತಿ ಎಂದರೆ ಅದು ಕರ್ನಾಟಕದಲ್ಲಿನ ಆಪರೇಷನ್ ಕಮಲ ಮಾತ್ರ ಎಂದೂ ಅವರು ವ್ಯಂಗ್ಯವಾಡಿದ್ದಾರೆ. ಈ ಮೂಲಕ ಮೋದಿ ಹಾಗೂ ರಾಜ್ಯ ಬಿಜೆಪಿ ನಾಯಕರನ್ನು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com