ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸುಪುತ್ರ ರೇವಣ್ಣ ಅವರು ಸತ್ಯಹರಿಶ್ಚಂದ್ರರಾಗಲಿ, ಆದರ್ಶವಾದಿಯಾಗಲಿ ಅಲ್ಲ. ಹಿರಿಯರಾಗಿರುವ ಅವರು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು. ಸಚಿವರಾಗಿ, ಶಾಸಕರಾಗಿ ಅನುಭವ ಹೊಂದಿರುವ ಅವರು ಈ ರೀತಿಯ ಹೇಳಿಕೆ ನೀಡಬಾರದು. ತಾವು ಸಹ ಹಳ್ಳಿಯಿಂದ ಬಂದಿದ್ದು, ತಮಗೂ ಬಾಯಿಗೆ ಬಂದಂತೆ ನಿಂದಿಸಲು ಬರುತ್ತದೆ. ಆದರೆ ರೇವಣ್ಣ ಅವರಂತೆ ನಡೆದುಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.