ಇಂದು ಮೈಸೂರಿನಲ್ಲಿ ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಮತ್ತು ರಾಷ್ಟ್ರಪತಿ ಆಡಳಿತದ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿಯವರು ಯಾರನ್ನು ಸಂಪರ್ಕಿಸಿದ್ದಾರೆಂದು ಗೊತ್ತು. ಯಾವ್ಯಾವ ಉಡುಗೊರೆ ನೀಡಿ ಆಮಿಷವೊಡ್ಡಿದ್ದಾರೆಂದೂ ತಿಳಿದಿದೆ. ಎಲ್ಲವನ್ನೂ ನಾನು ಗಮನಿಸುತ್ತಿದ್ದೇನೆ. ಆದರೆ, ಯಾರೂ ಪಕ್ಷ ಬಿಡುವ ಸ್ಥಿತಿಯಲ್ಲಿಲ್ಲ ಎಂದರು.