ಡಿಕೆಶಿ ಬುಕ್ ಮಾಡಿದ್ದ ರೂಂ ಕ್ಯಾನ್ಸಲ್ ಮಾಡಿದ ಹೋಟೆಲ್: ಐ ಲವ್ ಮುಂಬಯಿ ಎಂದ ಶಿವಕುಮಾರ್!

ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಮುಂಬಯಿಯ ರಿನೈಸೆನ್ಸ್ ಹೋಟೆಲ್ ನಲ್ಲಿ ಬುಕ್ ಮಾಡಿದ್ದ ಕೊಠಡಿಯನ್ನು ಹೋಟೆಲ್ ನವರು ಕ್ಯಾನ್ಸಲ್ ...
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
ಮುಂಬಯಿ: ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಮುಂಬಯಿಯ ರಿನೈಸೆನ್ಸ್ ಹೋಟೆಲ್ ನಲ್ಲಿ ಬುಕ್ ಮಾಡಿದ್ದ ಕೊಠಡಿಯನ್ನು ಹೋಟೆಲ್ ನವರು ಕ್ಯಾನ್ಸಲ್ ಮಾಡಿದ್ದಾರೆ.
ತುರ್ತು ಕಾರಣ ನೀಡಿ ಹೋಟೆಲ್ ನವರು ರೂಂ ಕ್ಯಾನ್ಸಲ್ ಮಾಡಿದ್ದಾರೆ, ಇದಕ್ಕೆ ನನಗೇನು ಬೇಸರವಿಲ್ಲ, ನಾನು ಮುಂಬಯಿಯನ್ನು ಪ್ರೀತಿಸುತ್ತೇನೆ, ಆ ಹೋಟೆಲ್ ಅನ್ನು ಪ್ರೀತಿಸುತ್ತೇನೆ, ನನ್ನಂತ ಕಸ್ಟಮರ್ ಪಡೆಯಲು ಹೋಟೆಲ್ ನವರು ಹೆಮ್ಮೆ ಪಡಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.
ಅವರು ರೂಂ ಕ್ಯಾನ್ಸಲ್ ಮಾಡಿದರೇ ಚಿಂತೆಯಿಲ್ಲ, ಬದಲಾಗಿ ನನಗೆ ಬೇರೆ ರೂಂ ಇದೆ ಎಂದು ಹೇಳಿದ್ದಾರೆ, ಬೆಳಗ್ಗೆ 8 ಗಂಟೆಗೆ ಮುಂಬಯಿಗೆ ಆಗಮಿಸಿದ್ದ ಡಿ.ಕೆ ಶಿವಕುಮಾರ್ ಹೋಟೆಲ್ ಮುಂದೆ ನಿಂತುಕೊಂಡೇ ಇದ್ದರು, ಹೀಗಾಗಿ ಪೊಲೀಸರು ಅವರಿಗೆ ಹೋಟೆಲ್ ಮುಂದೆಯೇ ಚೇರ್ ಹಾಕಿ ಕೂರಿಸಿದ್ದಾರೆ,. ಜೊತೆಗೆ ಉಪಹಾರದ ವ್ಯವಸ್ಥೆ ಕೂಡ ಮಾಡಿದ್ದಾರೆ. ಇವತ್ತು ಶಾಸಕರನ್ನು ಭೇಟಿ ಮಾಡಿಕೊಂಡೇ ಹೋಗುವುದಾಗಿ ಶಿವಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com