ಈ ಭೇಟಿ ಜೆಡಿಎಸ್ನ ಮಿತ್ರ ಪಕ್ಷ ಕಾಂಗ್ರೆಸ್ ಅನ್ನು ತಲ್ಲಣಗೊಳಿಸಿದ್ದು, ಕೆಲ ಮೂಲಗಳ ಪ್ರಕಾರ, ಜೆಡಿಎಸ್, ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸುವ ಸಾಧ್ಯತೆ ಇದೆ. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಜೆಡಿಎಸ್ ಬೇಷರತ್ ಬೆಂಬಲ ನೀಡಲಿದೆ. ಯಡಿಯೂರಪ್ಪ ಸಿಎಂ ಆಗಲಿದ್ದಾರೆ, ರೇವಣ್ಣ ಡಿಸಿಎಂ ಆಗಲಿದ್ದಾರೆ. ಈ ಸಂಬಂಧ ಸಾರಾ ಮಹೇಶ್ ಅವರು ಬಿಜೆಪಿ ನಾಯಕರೊಂದಿಗೆ ಮಾತನಾಡಿದರೆನ್ನಲಾಗುತ್ತಿದೆ.