ನಿಮ್ಮ ಬೇಸರವೇನು? ನಾವು ಪರಿಹರಿಸುತ್ತೇವೆ; ಇದೊಂದು ಬಾರಿ ನನ್ನ ಮನವಿಗೆ ಸಹಕರಿಸಿ: ಎಂಟಿಬಿ ಮನವೊಲಿಕೆಗೆ ಡಿಕೆಶಿ ಯತ್ನ!

ವಿಶ್ವಾಸಮತ ಯಾಚಿಸುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ದೋಸ್ತಿ ನಾಯಕರಿಂದ ಅತೃಪ್ತರ ಮನವೊಲಿಕೆ ಮಾಡಲು ಸರ್ಕಸ್ ...
ಎಂಟಿಬಿ ನಾಗರಾಜ್ ಮತ್ತು ಡಿಕೆಶಿವಕುಮಾರ್
ಎಂಟಿಬಿ ನಾಗರಾಜ್ ಮತ್ತು ಡಿಕೆಶಿವಕುಮಾರ್
ಬೆಂಗಳೂರು :  ವಿಶ್ವಾಸಮತ ಯಾಚಿಸುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ  ದೋಸ್ತಿ ನಾಯಕರಿಂದ ಅತೃಪ್ತರ ಮನವೊಲಿಕೆ ಮಾಡಲು ಸರ್ಕಸ್ ಮಾಡುತ್ತಿದ್ದಾರೆ.
ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಟ್ರಬಲ್ ಶೂಟರ್ ಡಿಕೆಶಿ ಅಖಾಡಕ್ಕಿಳಿದಿದ್ದು, ಎಂಟಿಬಿ ನಾಗರಾಜ್ ಅವರ ಮನವೊಲಿಕೆಗಾಗಿ ಅವರ ನಿವಾಸಕ್ಕೆ ಹೋಗಿದ್ದಾರೆ. 
ಬೆಂಗಳೂರಿನ ಹೊರವಲಯದಲ್ಲಿರುವ ಎಂಟಿಬಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸುಮಾರು 5 ಗಂಟೆಯಿಂದ ಡಿ.ಕೆ.ಶಿವಕುಮಾರ್ ಎಂಟಿಎಂ ನಾಗರಾಜ್ ಅವರ ಮನೆಯಲ್ಲಿ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ. 
ಆದರೆ ಯಾವುದಕ್ಕೂ  ಬಗ್ಗದ ನಾಗರಾಜ್ ನಾನು ಈಗಾಗಲೇ  ರಾಜಿನಾಮೆ ನೀಡಿದ್ದೇನೆ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ, ರಾಜಿನಾಮೆ ವಾಪಸ್ ಪಡೆಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿರುವ ಎಂಟಿಬಿ, ಸಿಎಂ ಕುಮಾರಸ್ವಾಮಿ ಮತ್ತು ಸಚಿವ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಿಮ್ಮ ಬೇಸರವೇನು? ನಾವು ಪರಿಹಾರ ಮಾಡುತ್ತೇವೆ ಎಂದು ಡಿಕೆಶಿ ಸಮಾಧಾನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು ಎರಡು ಗಂಟೆಯಿಂದ ಮನವೊಲಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದು ಸಫಲವಾಗುತ್ತಾ ಎಂಬ ಕುತೂಹಲ ಮೂಡಿದೆ. ಡಿಕೆಶಿ ಅವರು ಮಾತಿಗೂ ಎಂಟಿಬಿ ನಾಗರಾಜ್ ರಾಜೀನಾಮೆ ವಾಪಸ್ ತೆಗೆದುಕೊಂಡಿಲ್ಲ ಎಂದರೆ ಖುದ್ದಾಗಿ ಸಿಎಂ ಅವರು ಬಂದು ಮತ್ತೊಮ್ಮೆ ಮನವೊಲಿಕೆ ಕೆಲಸ ಮಾಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com