ಶುಕ್ರವಾರ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸಿಎಂಗೆ ಸ್ಪಷ್ಟ ಸೂಚನೆ ನೀಡಿದ್ದರು. ಆದರೆ, ಸದನದಲ್ಲಿ ಈಗಾಗಲೇ ಈ ಪ್ರಸ್ತಾವನೆ ಮೇಲೆ ಚರ್ಚೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಮಯಾವಕಾಶ ನೀಡುವಂತೆ ಸಿಎಂ ಪತ್ರ ಬರೆದ ಹಿನ್ನೆಲೆಯಲ್ಲಿ ರಾಜ್ಯಪಾಲರು 2ನೇ ಬಾರಿಗೆ ಗಡುವನ್ನು ದಿನಾಂತ್ಯದ ವರೆಗೆ ವಿಸ್ತರಣೆ ಮಾಡಿದರು. ಆದರೆ, ಈ ಗಡುವು ಪಾಲನೆಗೆ ಸಿಎಂ ಹಾಗೂ ಆಡಳಿತ ಪಕ್ಷದ ಕಡೆಯಿಂದ ಆಸಕ್ತಿ ವ್ಯಕ್ತವಾಗಲಿಲ್ಲ. ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರ ಗಡುವು ನೆನಪಿಸಿ ಮತ ವಿಭಜನೆ ಬೇಡಿಕೆ ಮಂಡಿಸಿದರೂ,ಸರ್ಕಾರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಲಿಲ್ಲ.