ಮೈಸೂರು: ನಿಮಗೆ ಮಂತ್ರಿ ಸ್ಥಾನವೂ ಬೇಕಾಗಿಲ್ಲ, ಹಣವೂ ಬೇಡ ಎಂದಾದರೆ ವಿಶೇಷ ವಿಮಾನದಲ್ಲಿ ಮುಂಬೈಗೆ ಹೋಗಿ ಏಕೆ ಕುಳಿತಿದ್ದೀರಿ, ಮುಂಬೈನಲ್ಲಿದ್ದುಕೊಂಡು ಮಾತನಾಡುವುದಲ್ಲ, ವಿಧಾನ ಸಭೆಗೆ ಬನ್ನಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ, ಮತ್ತಷ್ಟು ವಿಚಾರಗಳ ಬಿಚ್ಚಿಡುತ್ತೇನೆ ಎಂದು ಎಚ್ ವಿಶ್ವನಾಥ್ ಅವರಿಗೆ ಸಚಿವ ಸಾ ರಾ ಮಹೇಶ್ ಬಹಿರಂಗ ಸವಾಲು ಹಾಕಿದ್ದಾರೆ.