ಬಿಎಸ್ಪಿ ಶಾಸಕ ಶಾಸಕ ಎನ್. ಮಹೇಶ್ ಸೋಮವಾರ ಮತ್ತು ಮಂಗಳವಾರ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸುವ ಸಂದರ್ಭದಲ್ಲಿ ಸದನದಿಂದ ದೂರ ಉಳಿಯುವುದಾಗಿ ನೀಡಿರುವ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಮಹೇಶ್ ನಾಳೆ ಸದನಕ್ಕೆ ಬರುತ್ತಾರೆ ಎನ್ನುವ ವಿಶ್ವಾಸ ತಮಗಿದೆ ಎಂದರು. ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿರುವ ಬಗ್ಗೆ ತಮಗೇನು ಗೊತ್ತಿಲ್ಲ. ನಾವು ನಮ್ಮ ಶಾಸಕರನ್ನು ಕರೆ ತರುವ ಜಂಜಾಟದಲ್ಲಿದೇವೆ. ಶಾಸಕರು ಎಲ್ಲಿದಾರೆ ಎಂದು ಪತ್ತೆ ಹಚ್ಚಿ ಮಾತುಕತೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.