ಯಡಿಯೂರಪ್ಪನವರು ದೇವರ ಹೆಸರಿನಲ್ಲಿ ನಿನ್ನೆ ಸಂಜೆ 6.30ಕ್ಕೆ ಪ್ರಮಾಣವಚನ ಸ್ವೀಕರಿಸಿದರು. ಸಂಜೆ 5 ಗಂಟೆ ಹೊತ್ತಿಗೇ ಯಡಿಯೂರಪ್ಪ ಅಭಿಮಾನಿಗಳು ರಾಜಭವನ ಕಡೆಗೆ ಬರಲಾರಂಭಿಸಿದರು. ಹೊರಗೆ ರಸ್ತೆಯಲ್ಲಿ ಪಟಾಕಿ ಸಿಡಿಸುವುದು, ಸಿಹಿತಿಂಡಿ ಹಂಚುವುದು, ಮೆರವಣಿಗೆಯಲ್ಲಿ ಕಲಾವಿದರು ಬಂದು ಕುಣಿಯುವುದು, ಹಾರ, ತುರಾಯಿ ಸಂಭ್ರಮ ಕಂಡುಬಂತು. ಅಲ್ಲಲ್ಲಿ ಅಭಿಮಾನಿಗಳು ಮೋದಿ ಮತ್ತು ಅಮಿತ್ ಶಾ ಹೆಸರುಗಳನ್ನು ಸಹ ಕೂಗುತ್ತಿದ್ದರು. ಹಲವರು ಕೇಸರಿ ಶಾಲು ಹೊದ್ದುಕೊಂಡು ಬಂದು ಗಾಜಿನ ಮನೆಯ ಸಂಭ್ರಮವನ್ನು ಸವಿಯಲು ಲೋಹದ ಕಂಬದ ಮೇಲೆ ನಿಂತು ಇಣುಕುತ್ತಿದ್ದರು.