ರಾಷ್ಟ್ರೀಯ ಸಮಸ್ಯೆಗಳು ಪ್ರಮುಖವಾಗುತ್ತವೆ. ಈ ಬಗ್ಗೆ ಎಐಸಿಸಿ ಅಧ್ಯಯನ ನಡೆಸಲಿದೆ, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ, ನಾವು ಚುನಾವಣೆಯಲ್ಲಿ ಸೋತಿದ್ದೇವೆ, ಹಾಗಂದ ಮಾತ್ರಕ್ಕೆ ಪಕ್ಷದ ಕಥೆ ಮುಗಿದೇ ಹೋಯಿತು ಎಂದರ್ಥವಲ್ಲ, 1984 ರಲ್ಲಿ ಬಿಜೆಪಿ ಕೇವಲ 2 ಸೀಟು ಗೆದ್ದಿತ್ತು. ಬಿಜೆಪಿ ಕಥೆ ಮುಗಿಯಿತು ಎಂದು ನಾವು ಹೇಳಿರಲಿಲ್ಲ, ಆದರೆ ಬಿಜೆಪಿ ನಾಯಕರು ಮಾತ್ರ ಇಂಥ ಹೇಳಿಕೆ ನೀಡುತ್ತಿದ್ದಾರೆ.