-ಪಕ್ಷವನ್ನು ಬಲಪಡಿಸುವುದು ನನ್ನ ಕಾಳಜಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮೊದಲು, ಬಿಜೆಪಿ ನಂತರ ಮತ್ತು ಜೆಡಿಎಸ್ ಮೂರನೇ ಸ್ಥಾನ ಪಡೆದುಕೊಂಡಿದೆ. ಸ್ವತಂತ್ರ ಶಾಸಕರು ನನ್ನ ಶಕ್ತಿಗೆ ಸಮಾನರು. ಅವರು ಜೆಡಿಎಸ್ ನಿಂದ ಏಕೆ ಸ್ಪರ್ಧಿಸಬಾರದು? ಅವರು ಗೆದ್ದು ಬರಲಿಕ್ಕಿಲ್ಲ ಎಂಬ ಭಯವಿದೆ ಎಂದು ಕೆಲವರು ಹೇಳಿದರು. ಈ ಎಲ್ಲಾ ವಿಚಾರ ಬಿಟ್ಟು ನೀನು ರಾಜ್ಯದ ಜನತೆಗಾಗಿ ಕೆಲಸ ಮಾಡು, ತಳಮಟ್ಟದಿಂದ ನಾನು ಪಕ್ಷವನ್ನು ಕಟ್ಟುತ್ತೇನೆ ಎಂದು ಕುಮಾರಸ್ವಾಮಿಗೆ ಹೇಳಿದ್ದೇನೆ. ಕಾಂಗ್ರೆಸ್ ಬಲಪಡಿಸುವುದು ಸಿದ್ದರಾಮಯ್ಯ ಜವಾಬ್ದಾರಿ. ನಮ್ಮ ನಮ್ಮ ಹೇಳಿಕೆಗಳಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಹಾನಿಯುಂಟಾಗಬಾರದು.