ಮಧ್ಯಂತರ ಚುನಾವಣೆಯಿಂದ ರಾಜ್ಯದ ಜನತೆಗೆ ಹೊರೆಯಾಗಲಿದೆ: ಡಿವಿ ಸದಾನಂದಗೌಡ

ಮಧ್ಯಂತರ ಚುನಾವಣೆಯಿಂದಾಗಿ ರಾಜ್ಯಗ ಜನತೆಗೆ ಹೆಚ್ಚುವರಿ ಹೊರೆಯಾಗಲಿದೆ, ಹೀಗಾಗಿ ಒಂದು ವೇಳೆ ಅವಕಾಶ ನೀಡಿದರೇ ಬಿಜೆಪಿ ಎಲ್ಲವನ್ನು ...
ಡಿ.ವಿ ಸದಾನಂದಗೌಡ
ಡಿ.ವಿ ಸದಾನಂದಗೌಡ
ಬೆಂಗಳೂರು: ಮಧ್ಯಂತರ ಚುನಾವಣೆಯಿಂದಾಗಿ ರಾಜ್ಯಗ ಜನತೆಗೆ ಹೆಚ್ಚುವರಿ ಹೊರೆಯಾಗಲಿದೆ, ಹೀಗಾಗಿ ಒಂದು ವೇಳೆ ಅವಕಾಶ ನೀಡಿದರೇ ಬಿಜೆಪಿ ಎಲ್ಲವನ್ನು ಸರಿಪಡಿಸುತ್ತದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ,
ನೆಲಮಂಗಲದಲ್ಲಿ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದ, ಸದಾನಂದಗೌಡ ಚುನಾವಣೆಯಿಂದ ಅಭಿವೃದ್ಧಿ ಕೆಲಸಗಳು ಹಿಂದುಳಿಯುತ್ತವೆ ಎಂದು ತಿಳಿಸಿದ್ದಾರೆ. 
ಮಧ್ಯಂತರ ಚುನಾವಣೆಯಿಂದಾಗಿ ಜನರಿಗೆ ಹೊರೆಯಾಗುತ್ತದೆ, ಸದ್ಯದ ಪರಿಸ್ಥಿತಿಯಲ್ಲಿ ಮಧ್ಯಂತರ ಚುನಾವಣೆಯಿಂದಾಗಿ ಸಮಸ್ಯೆಯಾಗುತ್ತದೆ, ನಮ್ಮ ರಾಜಕೀಯ ಆಕಾಂಕ್ಷೆಯನ್ನು ಸಾಧಿಸಿಕೊಳ್ಳಲು ಜನರಗಿ ಸಮಸ್ಯೆ ಕೊಡುವುದು ಸರಿಯಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ, ಒಂದು ವೇಳೆ ಅವರು ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಒಂದು ಅವಕಾಶ ನೀಡೋಣ ಎಂದು ತಿಳಿಸಿದ್ದಾರೆ.
ಕಳೆದ ಮೂರು ನಾಲ್ಕು ತಿಂಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com